Saturday, December 22, 2012

ಪಾಳೆಯಗಾರರ ಗುಡೇಕೋಟೆ



ತಾಲೂಕಿನಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸಿದ ಹಲವಾರು ಚಾರಿತ್ರಿಕ ಸ್ಥಳಗಳ್ದಿದು, ಅವುಗಳಲ್ಲಿ ಮಹತ್ವವಾದದ್ದು ಗುಡೇಕೋಟೆ ಪ್ರದೇಶ. ಗುಡೇಕೋಟೆ ತಾಲೂಕಿನ ಹೋಬಳಿ ಕೇಂದ್ರವಾಗಿದ್ದು, ತಾಲೂಕು ಕೇಂದ್ರದಿಂದ ೨೮ ಕಿ.ಮೀ ದೂರದ್ಲಲಿದೆ. ಇಲ್ಲಿನ ದಂತಕಥೆಯಂತೆ ಗುಡೇಕೋಟೆಯನ್ನು ಬಾಣಾಸುರನೆಂಬ ಅರಸ ಆಳುತ್ತಿದ್ದ. ಮಹಾನ್ ಶಿವಭಕ್ತನಾಗ್ದಿದ ಬಾಣಾಸುರನ ಕೋರಿಕೆಯಂತೆ ಶಿವಪಾರ್ವತಿಯರು ಗುಡೇಕೋಟೆಯನ್ನು ರಕ್ಷಿಸುವುದಾಗಿ ಅಭಯ ನೀಡಿದ್ದರಂತೆ. ಅದರಂತೆಯೇ ಇಂದಿಗೂ ಗುಡೇಕೋಟೆ ಗ್ರಾಮದ ಹೊರಭಾಗದಲ್ಲಿ ಶಿವಪಾರ್ವತಿಯರ ಸುಂದರ ದೇಗುಲವಿದೆ. ವಿಶೇಷವೆಂದರೆ ಶಿವನು ಪಾರ್ವತಿಯನ್ನು ತೊಡೆಯ ಮೇಲೆ ಕೂಡಿಸಿಕೊಂಡಿರುವ ಅಪರೂಪದ ವಿಗ್ರಹ ಇಲ್ಲಿದೆ.


ಸಂಶೋಧಕರ ಅಭಿಮತದಂತೆ ಗುಡ್ಡದ ಮೇಲೆ ಕಟ್ಟಿರುವ ಕೋಟೆಯಿರುವ ಕಾರಣ ಇದನ್ನು ಗುಡ್ಡದಕೋಟೆ, ಗುಡ್ಡಕೋಟೆ, ಗುಡೇಕೋಟೆ ಎಂಬ ಹೆಸರು ಬರಲು ಕಾರಣವಿರಬಹುದು ಎನ್ನುತ್ತಾರೆ. ಗುಡೇಕೋಟೆಯನ್ನು ಆಳಿದ ಪಾಳೆಯಗಾರರ‍್ಲಲಿ ಪ್ರಮುಖರೆಂದರೆ ಗಂಡಳನಾಯಕ, ಬೊಮ್ಮಂತರಾಜ, ಚಿನ್ನಯರಾಜ, ಇಮ್ಮಡಿ ರಾಜಪ್ಪನಾಯಕ, ಜಟಿಂಗರಾಯ, ರಾಮಪ್ಪನಾಯಕ, ಇನ್ನಿತರರು. ಗುಡೇಕೋಟೆ ಪಾಳೆಯಗಾರರೊಂದಿಗೆ ಚಿತ್ರದುರ್ಗದ ಪಾಳೆಯಗಾರರು ಸಂಬಂಧ ಬೆಳೆಸಿದ್ದರು ಎಂದು ಸಂಶೋಧಕ ಡಾ.ವಿರುಪಾಕ್ಷಿ ಪೂಜಾರಹಳ್ಳಿಯವರಿಂದ ತಿಳಿದುಬರುತ್ತದೆ. ಮಹತ್ವದ ಅಂಶವೆಂದರೆ ಕನ್ನಡ ನಾಡಿನ ವೀರ ಮಹಿಳೆಚಿiರಲ್ಲಿ ಒಬ್ಬಳಾಗಿರುವ ಚಿತ್ರದುರ್ಗದ ಒನಕೆ ಓಬವ್ವನ ತವರೂರು ಗುಡೇಕೋಟೆ. ಗುಡೇಕೋಟೆಯ ಛಲವಾದಿ ಚಿನ್ನಪ್ಪನ ಮಗಳು ಓಬವ್ವ ಎಂದು ಆಕರ ಗ್ರಂಥಗಳಿಂದ ತಿಳಿದುಬರುತ್ತದೆ. 
ಗುಡೇಕೋಟೆ ಸುತ್ತಲೂ ಬೆಟ್ಟಗಳಿಂದ ಆವರಿಸಿರುವ ಪ್ರದೇಶ. ಶತ್ರುಗಳಿಗೆ ಸುಲಭವಾಗಿ ನಿಲುಕಲಾಗದ ಬೃಹತ್ ಹೆಬ್ಬಂಡೆಗಳಿಂದ ಕೂಡಿರುವ ಬೆಟ್ಟದ ಮೇಲೆ ಸುಂದರವಾದ, ಅಭೇದ್ಯವಾದ ಕೋಟೆಯನ್ನು ನಿರ್ಮಿಸಲಾಗಿದೆ. ಕೋಟೆ ಅಲ್ಲಲ್ಲಿ ಶಿಥಿಲವಾಗಿದು, ಗತವೈಭವವನ್ನು ಸಾರುತ್ತದೆ. ಗುಡೇಕೋಟೆಯ್ಲಲಿ ತಕ್ಷಣವೇ ಆಕರ್ಶಿಸುವುದು ಗ್ರಾಮದ ಪ್ರವೇಶದ್ವಾರದಲ್ಲಿಯೇ ಇರುವ ಉಪ್ಪರಿಗೆಯ ಸ್ಮಾರಕ. ವಾಸ್ತುಶಿಲ್ಪ ಶೈಲಿಯಿಂದ ತಕ್ಷಣ ಗಮನ ಸೆಳೆಯುತ್ತದೆ. ಇದನ್ನು ತಂಗಾಳಿ ಮಹಲ್ ಎಂದೂ ಕರೆಯುತ್ತಾರೆ. ಈಗಾಗಲೇ ಶಿಥಿಲಾವಸ್ಥೆಯ್ಲಲಿರುವ ಸುಂದರ ಉಪ್ಪರಿಗೆಯನ್ನು ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ರಕ್ಷಿಸಬೇಕಾಗಿದೆ.


ಇದಲ್ಲದೆ ಇಲ್ಲಿ ಪಾಳೆಯಗಾರರ ಕಾಲಕ್ಕೆ ಸಂಬಂಧಿಸಿದ ಆಂಜನೇಯ ದೇವಾಲಯ, ಚೌಡಮ್ಮ ದೇವಾಲಯ, ಮಲಿಯಮ್ಮ ದೇವಾಲಯ, ರಾಮಲಿಂಗೇಶ್ವರ ದೇವಾಲಯ, ಬಸವಣ್ಣ ದೇವಾಲಯ, ಕಾಳಮ್ಮ ದೇವಾಲಯ, ಈಶ್ವರ ದೇವಾಲಯ, ಲಕ್ಷ್ಮೀ ವೆಂಕಟೇಶ್ವರ ದೇವಾಲಯ, ಚೌಳೇಶ್ವರ, ಪಂಚಲಿಂಗೇಶ್ವರ, ಶಿವ-ಪಾರ್ವತಿಯರ ದೇವಾಲಯ ಪ್ರಮುಖವಾದವು. ಎಲ ದೇವಾಲಯಗಳೂ ವಿಜಯನಗರ ಪೂರ್ವ ಮತ್ತು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿರುವ ದೇವಾಲಯಗಳಾಗಿವೆ. ಗುಡೇಕೋಟೆಯಲ್ಲಿ ಸಂಚರಿಸುವಾಗ ಪಾಳೆಯಗಾರರ ಆಳ್ವಿಕೆಯ ಪ್ರದೇಶದಲ್ಲಿ ಸಂಚರಿಸುತ್ತಿರುವ ಅನುಭವ ಇನ್ನೂ ಉಂಟಾಗಲು ಕಾರಣವೆಂದರೆ ಆಗಿನ ಕುರುಹುಗಳು ಇನ್ನೂ ಸ್ಮಾರಕಗಳಾಗಿ ಉಳಿದಿರುವುದು. ಕೂಡ್ಲಿಗಿ ತಾಲೂಕಿನಲ್ಲಿ ಸಂದರ್ಶಿಸಬೇಕಾದ ಪ್ರೇಕ್ಷಣೀಯ ಐತಿಹಾಸಿಕ ಸ್ಥಳಗಳಲ್ಲಿ ಗುಡೇಕೋಟೆಯೂ ಒಂದು. ಇಲ್ಲಿನ ಸ್ಮಾರಕಗಳನ್ನು ಉಳಿಸಿಕೊಳ್ಳುವ, ಸಂರಕ್ಷಿಸುವ ಕಾರ್ಯ ಮಾತ್ರ ಆಗಬೇಕಾಗಿರುವ ಮಹತ್ವದ ಕಾರ್ಯವಾಗಿದೆ. 

ಕೂಡ್ಲಿಗಿ ತಾಲೂಕಿನ ಶಿಲಾಯುಗದ ನಿಲುಗಲ್ಲುಗಳು



ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಪ್ರಾಗೈತಿಹಾಸಿಕದ ಕುರುಹುಗಳನ್ನು ಹೊಂದಿರುವ ಅನೇಕ ಸ್ಥಳಗಳಿವೆ. ಇತಿಹಾಸಕಾರರು ಇವುಗಳನ್ನು ಪತ್ತೆಹಚ್ಚುವಲ್ಲಿ ಅಥವಾ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ಗುರುತಿಸುವಲ್ಲಿ ನಿರ್ಲಕ್ಷಿಸಿದ್ದರೂ, ಗ್ರಾಮಸ್ಥರಲ್ಲಿ ಅವುಗಳ ಬಗ್ಗೆ ನಂಬಿಕೆ, ಮುಗ್ಧತೆ ಇನ್ನೂ ಉಳಿದುಕೊಂಡು ಬಂದಿದೆ. ಅವುಗಳಲ್ಲಿ ವಿಶೇಷವಾದುದು ತಾಲೂಕಿನ ಕುಮತಿ ಹಾಗೂ ಹುಲಿಕುಂಟೆ ಗ್ರಾಮಗಳ ಬಳಿಯಿರುವ ಬೃಹತ್ ಗಾತ್ರದ ರಕ್ಕಸಗಲ್ಲು ಅಥವಾ ನಿಲುಗಲ್ಲುಗಳು.


ಕೂಡ್ಲಿಗಿಯಿಂದ ಸುಮಾರು ೪೫ ಕಿ.ಮೀ ದೂರದ್ಲಲಿರುವ ಕುಮತಿ ಗ್ರಾಮದ ಹೊರವಲಯದ ಹೊಲದಲ್ಲಿ ೨ ಒರಟು ಕಲ್ಲಿನ ಮಾನವಾಕೃತಿಗಳನ್ನು ನಿಲ್ಲಿಸಲಾಗಿದೆ. ಪ್ರತಿಯೊಂದು ರಕ್ಕಸಗಲ್ಲು ೧೦ ಅಡಿ ಎತ್ತರ ಇವೆ. ಒರಟು ಬಂಡೆಯಲ್ಲಿ ಕೆತ್ತಲಾಗಿರುವ ಇವಕ್ಕೆ ಯಾವುದೇ ರೀತಿಯ ಕುಶಲ ಕೆತ್ತನೆಯಿಲ್ಲ. ರುಂಡದ ಭಾಗ ಹಾಗೂ ಎರಡು ಕೈಗಳನ್ನು ಸಂಕೇತಿಸುವಂತೆ ಮಾತ್ರ ಒರಟು ಬಂಡೆ ಕಲ್ಲಿನಲ್ಲಿ ಕೆತ್ತಲಾಗಿದೆ. ಇದೇ ಸ್ಥಳದಲ್ಲಿಯೇ ಇನ್ನೂ ೩ ಮಾನವಾಕೃತಿಯ ಶಿಲೆಗಳಿರಬಹುದಾದ ಅವಶೇಷಗಳಿವೆ. ಹುಲಿಕುಂಟೆ ಗ್ರಾಮದ ಹೊರವಲಯದಲ್ಲಿನ ಬೆಟ್ಟದಲ್ಲಿಯೂ ಕುಮತಿ ರೀತಿಯ ನಿಲುಗಲ್ಲುಗಳಿವೆಯಾದರೂ, ಗಾತ್ರದಲ್ಲಿ ಇವು ಚಿಕ್ಕವು. ಇವುಗಳ ಗಾತ್ರ ೪ ಅಡಿ. ಇಲ್ಲಿಯೂ ಸಹ ೧ ನಿಲುಗಲ್ಲು ಸುಸ್ಥಿತಿಯಲ್ಲಿದ್ದು, ಮತ್ತೆರಡು ಕಾಲನ ತುಳಿತಕ್ಕೆ ನಾಶವಾಗಿವೆ. ಅವುಗಳ ತುಂಡುಗಳೂ ಸಹ ಅಲ್ಲಿಯೇ ಇವೆ. ಸ್ಥಳೀಯರು ಇವುಗಳನ್ನು ‘ರಕ್ಕಸಗಲ್ಲು’ ‘ರಕ್ಕಸಮಡ್ಡಿ’ ಎಂದೇ ಕರೆಯುತ್ತಾರೆ. ನುಂಕಮಲ್ಲೇಶ್ವರನು ರಾಕ್ಷಸರಿಗೆ ಬಾಣ ಹೊಡೆದಾಗ, ರಾಕ್ಷಸರು ಈ ರೀತಿಯಲ್ಲಿ ಕಲ್ಲಾಗಿ ನಿಂತರು ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.


ಇವು ಮಧ್ಯಪ್ರಾಚೀನ ಶಿಲಾಯುಗದ ನಿಲುಗಲ್ಲುಗಳಾಗಿವೆ ಎಂಬುದು ಸಂಶೋಧಕರ ಅಭಿಮತ. ೧೯೯೫ರಲ್ಲಿ ಕೇಂದ್ರ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಡಾ.ಕೆ.ಪಿ.ಪೂಣಚ್ಚ, ಡಾ.ಎಂ.ಸಿ.ನರಸಿಂಹನ್ ನೇತೃತ್ವದಲ್ಲಿ ಗ್ರಾಮಾಂತರ ಸರ್ವೇಕ್ಷಣ ಸಂದರ್ಭದಲ್ಲಿ ಕುಮತಿಯ ಗ್ರಾಮದ ಕೆ.ಎಂ.ತಿಪ್ಪೇರುದ್ರಯ್ಯನವರ ಹೊಲದಲ್ಲಿ ಈ ಮಾನವಾಕೃತಿಯ ಶಿಲ್ಪಗಳನ್ನು ಪ್ರಥಮ ಬಾರಿಗೆ ಪತ್ತೆ ಹಚ್ಚಲಾಯಿತು. ಇವುಗಳನ್ನು ದೇಶದಲ್ಲಿಯೇ ಅಪರೂಪವೆನ್ನಲಾಗಿದ್ದು, ಈ ರೀತಿಯ ನಿಲುಗಲ್ಲುಗಳು ಆಂದ್ರಪ್ರದೇಶ, ತಮಿಳುನಾಡು, ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಮಾತ್ರ ಈ ರೀತಿಯ ಆಕೃತಿಗಳು ದೊರೆತಿವೆ ಎಂದಿದ್ದಾರೆ, ಆದರೆ ಅವುಗಳಾವವೂ ಈ ರೀತಿಯಲ್ಲಿ ಸುಸ್ಥಿತಿಯಲ್ಲಿ ಇಲ್ಲ ಎಂದು ಅವರು ತಮ್ಮ ಸಂಶೋಧನಾ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇವು ದೇಶದಲ್ಲಿಯೇ ಸುಸ್ಥಿತಿಯಲ್ಲಿರುವ ಅಪರೂಪದ ಮಾನವಾಕೃತಿಯ ಶಿಲ್ಪಗಳೆನ್ನುವುದಕ್ಕೆ ಸಂಶೋಧಕರಾದ ಡಾ.ಅ.ನ.ಸುಂದರ್, ಪ್ರೊ.ಲಕ್ಷ್ಮಣ ತೆಲಗಾವಿ, ಡಾ.ಶೇಷಾದ್ರಿ ಮುಂತಾದವರು ಸಹಮತ ವ್ಯಕ್ತಪಡಿಸಿದ್ದಾರೆ.
ರಕ್ಕಸಗಲ್ಲುಗಳಿರುವ ಸ್ಥಳಕ್ಕೆ ಅನೇಕ ವಿದ್ವಾಂಸರು, ಸಂಶೋಧಕರು ಭೇಟಿ ನೀಡಿದ್ದಾರೆ. ಪತ್ರಿಕೆಯಲ್ಲಿಯೂ ಈ ಕುರಿತು ವರದಿ ಪ್ರಕಟಗೊಂಡಿದೆ. ಆದರೆ ಇದುವರೆಗೂ ಈ ಕುರಿತು ಗಂಭೀರವಾದ ಚರ್ಚೆ ನಡೆದಿಲ್ಲ. ಕುಮತಿ ಹಾಗೂ ಹುಲಿಕುಂಟೆ ಗ್ರಾಮದ ಹೊರವಲಯದಲ್ಲಿ ಉಳಿದಿರುವ ೨ ರಕ್ಕಸಗಲ್ಲುಗಳನ್ನು ಸಂರಕ್ಷಿಸುವಲ್ಲಿ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ಕ್ರಮ ಕೈಗೊಂಡಲ್ಲಿ, ಸಂಶೋಧಕರ ಸಂಶೋಧನೆಗೆ ರಕ್ಕಸಗಲ್ಲುಗಳು ನೆರವಾಗಬಹುದು. ಇಲ್ಲದಿದ್ದಲ್ಲಿ ಉಳಿದಿರುವ ಈ ಅಪೂರ್ವವಾದ ರಕ್ಕಸಗಲ್ಲುಗಳೂ ನಶಿಸಿಹೋಗಬಹುದಾಗಿದೆ.